ಆಯುಧಗಳನ್ನು ಬಳಸದೆ ಸ್ವಸಾಮರ್ಥ್ಯದಿಂದ ಶಕ್ತಿ ಯುಕ್ತಿ ಬಳಸಿ ಇನ್ನೊಬ್ಬನೊಡನೆ ಗೆಲ್ಲುವ ಕ್ರೀಡೆಯೇ ಕುಸ್ತಿ. ಭಾರತದಲ್ಲಿ ರಾಮಾಯಣ ಮಹಾಭಾರತ ಕಾಲದಿಂದಲೂ ಕುಸ್ತಿ ಪ್ರಸಿದ್ಧಿ ಹೊಂದಿದೆ. ವಾಲಿ-ಸುಗ್ರೀವ, ಭೀಮ- ಹಿಡಿಂಬ, ಬಕ, ಕೀಚಕ, ಜರಾಸಂಧ, ಆಂಜನೇಯ, ದುರ್ಯೋಧನ, ಕಿರಾತಾರ್ಜುನ, ಕೃಷ್ಣ, ಜಾಂಬವ ಇತ್ಯಾದಿ ಪುರಾಣಾಂತರ್ಗತವಾಗಿವೆ. ಸಳನೆಂಬ ಸಾಮಾನ್ಯ ಬಾಲಕ ತನ್ನ ಗುರುವಿನ ಅಣತಿಯಂತೆ ಸಮಯಸ್ಫೂರ್ತಿಯಿಂದ ಹುಲಿಯೊಂದನ್ನು ಸಂಹರಿಸಿದ್ದು ಹೊಯ್ಸಳ ರಾಜ್ಯಕ್ಕೆ ಬುನಾದಿ ಆದದ್ದು ಚರಿತ್ರೆ. ಸಳನೂ ಉತ್ತಮ ಕುಸ್ತಿಪಟು ಆಗಿದ್ದಿರಲೇಬೇಕು. ಕಂಠೀರವ ನರಸರಾಜ ಒಡೆಯರ್ ಅವರು ಮೈಸೂರು ರಾಜ್ಯದ ಅಭಿವೃದ್ಧಿಗೆಂದು ಕೈಗೊಂಡ ಪಂಚ ಕಲ್ಯಾಣ ಯೋಜನೆಯಲ್ಲಿ ದೇಹದ ಸ್ವಾಸ್ಥ್ಯಕ್ಕೆ ಗರಡಿ, ಆಧ್ಯಾತ್ಮಕ್ಕೆ ರಾಮಮಂದಿರ, ನ್ಯಾಯಕ್ಕೆ ಅರಳಿಕಟ್ಟೆ, ಕೃಷಿಗೆ ಗೋಶಾಲೆ ಮತ್ತು ಗ್ರಾಮಕ್ಕೆ ಕೆರೆ ಸ್ಥಾಪಿಸಿದ್ದು ಇಂದಿಗೂ ಪ್ರತೀ ಗ್ರಾಮಗಳಲ್ಲಿಯ ಗ್ರಾಮದೇವತೆ ಹಬ್ಬಗಳಲ್ಲಿ ಮಹಿಳೆಯರಿಗೆ ಪೂಜೆ ಪುನಸ್ಕಾರ, ಅತಿಥಿ ಸತ್ಕಾರ, ಹಿರಿಯರಿಗೆ ನಾಟಕ, ಕಿರಿಯರಿಗೆ ಕುಸ್ತಿಯೇ ಪೂಜೆ. ರಕ್ಷಣಾ ಇಲಾಖೆಯಲ್ಲಿ ಆದ್ಯತೆ ಮೇರೆಗೆ ಕುಸ್ತಿಪಟುಗಳು ನೇಮಕಗೊಳ್ಳುವುದು ರಾಜರ ಕಾಲದಿಂದಲೂ ನಡೆಯುತ್ತಿದ್ದುದು, ಇಂದಿಗೂ ಅದು ರೂಢಿಯಲ್ಲಿದೆ. ನಲವತ್ತು ಅಡಿಯ ಸುತ್ತಳತೆಯ ಕೆಂಪು ಮಣ್ಣಿನಲ್ಲಿ ಕುಂಕುಮ ಕೇಸರಿ ಔಷಧೀಯ ಸಸ್ಯಗಳ ಮಿಶ್ರಣದ ಅಲಂಕೃತ ಅಖಾಡದಲ್ಲಿ, ಸುತ್ತಲೂ ಪ್ರೇಕ್ಷಕರ ಜಯಘೋಷದಲ್ಲಿ ತೀರ್ಪುಗಾರರು, ಗುರುಗಳು, ಉಸ್ತಾದರು, ಯಜಮಾನರು, ಮುಖಂಡರು, ಗಣ್ಯರನ್ನೊಳಗೊಂಡ ಕುಸ್ತಿ ಸಚಿವಾಲಯದ ಸಮ್ಮುಖದಲ್ಲಿ ನಿಯಮದಂತೆ ಕುಸ್ತಿ ಪಂದ್ಯಾವಳಿ ನಡೆಯುವುದು.
ಪ್ರತಿಯೊಬ್ಬ ಕುಸ್ತಿ ಪಟುವಿನಲ್ಲಿರಬೇಕಾದದ್ದು ಶಕ್ತಿ, ದಮ್ಮುಕಸ್ತು, ಪಟ್ಟುಗಳು (ಡಾವುಗಳು) ಹಾಗೂ ಚತುರತೆ. ಶಕ್ತಿಗೆ ಕಠಿಣ ಆಹಾರಕ್ರಮವಾದರೆ, ದಮ್ಮುಕಸ್ತಿಗೆ ಪ್ರಾಣಾಯಾಮ ಅತ್ಯವಶ್ಯ. ಡಾವುಗಳಲ್ಲಿ ಶಕ್ತಿ ಪ್ರಧಾನವಾದುದು ಭೀಮಸೇನೀ, ಯುಕ್ತಿ ಪ್ರಧಾನವಾದುದು ಹನುಮಂತೀ. ಕೈಕಾಲು ಮುರಿಯುವಂತದ್ದು ಜಾಂಬವತೀ, ಎಲ್ಲವೂ ಮಿಶ್ರಿತವಾದುದು ಜರಾಸಂಧೀ. ಸುಮಾರು ೧೪೬ ಡಾವುಗಳನ್ನು ಗುರುತಿಸಲಾಗಿದ್ದು, ಈಗ ಕೇವಲ ೧೦-೧೫ ರೂಢಿಯಲ್ಲಿವೆ. ನಿಗದಿತ ಸಮಯದೊಳಗೆ ಚಿತ್ ಮಾಡಿದಾಗ (ಬೆನ್ನು ಮಣ್ಣಿಗೆ ಮುಟ್ಟಿಸುವುದು) ಸೋಲು ಗೆಲುವು ನಿರ್ಧಾರವಾಗುತ್ತದೆ.
ಹೊಯ್ಸಳ ರಾಜ ಬಲ್ಲಾಳ ೨ ಮೈಸೂರು ತಾಲೂಕಿನ, ಕೆ.ಹೆಮ್ಮನಹಳ್ಳಿಯಲ್ಲಿ (ಬೋಗಾದಿ ರಸ್ತೆ ೯ನೇ ಕಿ.ಮೀ) ಕ್ರಿ.ಶ. ೧೧೮೮ರಲ್ಲಿ ಸ್ಥಾಪಿಸಿದ ಶ್ರೀ ಮಹಾಲಿಂಗೇಶ್ವರ ದೇವಾಲಯವು ಸಳನ ಕ್ಷಾತ್ರತ್ವವನ್ನು ನೆನೆಸಿ ಉಳಿಸಿ ಮುಂದುವರೆಸಿಕೊಂಡು ಹೋಗುವ ದೃಷ್ಟಿಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ನ್ಯಾಸದ ವತಿಯಿಂದ ೧೯೯೪ರಲ್ಲಿ ಮಹಾಲಿಂಗೇಶ್ವರ ದೇವಾಲಯ ಜೀರ್ಣೋದ್ಧಾರಗೊಳಿಸಿದಂದಿನಿಂದಲೂ ಪ್ರತೀಯುಗಾದಿಗೆ ರಾಜ್ಯಮಟ್ಟದ ನಾಡಕುಸ್ತಿ ಪಂದ್ಯಾವಳಿಯನ್ನು ಏರ್ಪಡಿಸುತ್ತ ಬಂದಿರುತ್ತದೆ. ಈ ಸಲದ ಪಂದ್ಯಾವಳಿ ೨೫-೩-೨೦೧೨ ಭಾನುವಾರ ಅಪರಾಹ್ಣ ೨.೩೦ರಿಂದ ೩೦ ಜೋಡಿಗಳಿಂದ ನಡೆಯಲಿದೆ. ಶ್ರೀ ಜಯಚಾಮರಾಜ ಒಡೆಯರ್ ಗರಡಿ ಸಂಘದ ಪ್ರಧಾನ ಕಾರ್ಯದರ್ಶಿ ಯ/ಪೈ/ಎನ್. ಮಹಾದೇವ್ ಅವರ ಅಧ್ಯಕ್ಷತೆಯಲ್ಲಿ ಮೈಸೂರು ಜಿಲ್ಲೆಯ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಡೆಯಲಿರುವುದು. ಪ್ರೇಕ್ಷಕರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಇರುತ್ತದೆ. ಉಚಿತ ಪ್ರವೇಶ.
೧ ಬೋಗಾದಿ ಚೇತನ್ * ರಮ್ಮನಹಳ್ಳಿ ಪ್ರತಾಪ
೨ ಶ್ರೀರಂಗಪಟ್ಟಣ ಮಂಜುನಾಥ * ಮೇಳಾಪುರ ವಿನಯಕುಮಾರ್
೩ ನಗುವಿನಹಳ್ಳಿ ಮೋಹನಕುಮಾರ್ * ಕ್ಯಾತಮಾರನಹಳ್ಳಿ ಸುರೇಶ
೪ ಉದ್ಬೂರು ವೆಂಕಟೇಶ * ಮೈಸೂರು ಪ್ರಶಾಂತನಾಯಕ
೫ ಕ್ಯಾತಮಾರನಹಳ್ಳಿ ಮಂಜುನಾಥ * ಲಕ್ಷ್ಮೀಪುರ ಹೇಮಂತಕುಮಾರ್
೬ ಕ್ಯಾತಮಾರನಹಳ್ಳಿ ದೇವರಾಜು * ಮೈಸೂರು ಕೃಷ್ಣ ಮೇಟಗಳ್ಳಿ
೭ ಮೈಸೂರು ವಿಜಯ್ * ಬೋಗಾದಿ ತ್ಯಾಗರಾಜು
೮ ಕ್ಯಾತಮಾರನಹಳ್ಳಿ ಮಹೇಂದ್ರ * ಹುಲ್ಲಿನಬೀದಿ ರವೀಂದ್ರ
೯ ನಗುವಿನಹಳ್ಳಿ ಮಂಜುನಾಥ * ರಮ್ಮನಹಳ್ಳಿ ವಿಜಿ
೧೦ ಮೇಳಾಪುರದ ದೀಪಕ್ * ಹೊಸುಂಡಿ ಚಂದ್ರ
೧೧ ನಗುವಿನಹಳ್ಳಿ ನವೀನ * ಉದ್ಬೂರು ಮಹದೇವ
೧೨ ಜಿ.ಬಿ. ಸರಗೂರು ಮಹೇಶ * ರಮ್ಮನಹಳ್ಳಿ ಗೋಪಾಲ
೧೩ ಮಹದೇವಪುರ ದೇವರಾಜು * ಉದ್ಬೂರು ಸುಂದರ
೧೪ ಕ್ಯಾತಮಾರನಹಳ್ಳಿ ಬಸವರಾಜು * ಬೋಗಾದಿ ಪ್ರಸನ್ನ
೧೫ ಜಿ.ಬಿ. ಸರಗೂರು ಅಶೋಕ * ಮೇಳಾಪುರ ಪವನಕುಮಾರ
೧೬ ಬೋಗಾದಿ ಮಂಜು * ಜಟ್ಟಿಹುಂಡಿ ಭೈರವ
೧೭ ಕ್ಯಾತಮಾರನಹಳ್ಳಿ ಜಗದೀಶ * ನಂಜನಗೂಡು ಶ್ರೀಕಂಠ
೧೮ ಕ್ಯಾತಮಾರನಹಳ್ಳಿ ರಮೇಶ * ಬೋರೆ ಆನಂದೂರು ಪಾಪಣ್ಣ
೧೯ ಬೋಗಾದಿ ಮಂಜೇಶ * ಶ್ರೀರಂಗಪಟ್ಟಣ ಶ್ರೀನಿವಾಸ
೨೦ ಬೋಗಾದಿ ರವಿಕಿರಣ * ನಂಜನಗೂಡು ಗುರುಪ್ರಸಾದ
೨೧ ಅಶೋಕಪುರ ಕಿರಣ ಆರ್ * ಉದ್ಬೂರು ಗಿರೀಶ
೨೨ ಚಂದಗಾಲದ ಸೀನ * ಕೆ.ಹೆಮ್ಮನಹಳ್ಳಿ ಸೋಮು
೨೩ ಸುಣ್ಣದಕೇರಿ ವಾಸಿಂಪಾಷ * ಗಾಂಧಿನಗರ ಕೆ.ಕಿರಣ
೨೪ ಮೈಸೂರು ಅಮೃತಕುಮಾರ * ಬೋಗಾದಿ ರಘು
೨೫ ಚಂದಗಾಲದ ರಾಜ * ನಂಜನಗೂಡು ಗುರು
೨೬ ಬೋಗಾದಿ ಸಿ. ಕುಮಾರ * ಕ್ಯಾತಮಾರನಹಳ್ಳಿ ಗುರು
೨೭ ನಗುವನಹಳ್ಳಿ ಶೇಖರ್ * ನಂಜನಗೂಡು ಶಿವಕುಮಾರ
೨೮ ಹೆಬ್ಬಾಡಿಹುಂಡಿ ಸಿದ್ದಿಕ್ ಪಾಷಾ * ಲಕ್ಷ್ಮೀಪುರ ರಾಘವೇಂದ್ರ
೨೯ ಉದ್ಬೂರು ವಾಸು * ನಗುವನಹಳ್ಳಿ ವಿನಯಕುಮಾರ
೩೦ ಬೋಗಾದಿ ಶಂಕರ್ * ಭೂತನಪುರ ಎಂ ದೀಕ್ಷಿತ್
ಜಿ.ಎನ್. ಅನಂತವರ್ಧನ
ಮನೆ ಸಂಖ್ಯೆ ೮ ಅತ್ರಿ ಕಾಮಾಕ್ಷಿ ಆಸ್ಪತ್ರೆ ರಸ್ತೆ,
ಸರಸ್ವತೀಪುರ,
ಮೈಸೂರು ೫೭೦೦೦೯, ೯೪೪೯೨೬೪೯೨೦